Horizontal Menu

Drop Down MenusCSS Drop Down MenuPure CSS Dropdown Menu

Saturday 8 March 2014

ಕೆರೆಗೆ ಹಾರ ಮತ್ತು ಗಿರಿಬಾಲೆ - ಒಂದು ಪಾಮರ ವಿಮರ್ಶೆ

'ಕೆರೆಗೆ ಹಾರ' ಎನ್ನುವ ಹೆಸರೇ ಅರ್ಥಪೂರ್ಣ. 'ಹಾರ' ಎಂದರೆ 'ಹೂವಿನ ಹಾರ'ವೋ ಅಥವಾ 'ತಿನ್ನ, ಕುಡಿಯ, ಮಾಡ' ಎಂದೆಲ್ಲ ನಾವು ಹೇಳುವಂತೆ 'ಹಾರಲಿಕ್ಕಿಲ್ಲ' ಅಂದರೆ 'ನಾನು ಕೆರೆಗೆ ಹಾರಲಾರೆ' ಎನ್ನುವ ನಿಷೇಧಾರ್ಥಕ ಕ್ರಿಯಾಪದವೋ - ಅಂತೂ ನಾಟಕಕರ್ತನ ಸೃಜನಶೀಲತೆಯನ್ನು ಮೆಚ್ಚಬೇಕು. ನಿನ್ನೆ ಕುಕ್ಕಾಜೆಯ ಬಿ.ವಿ.ಕಾರಂತ ನಾಟಕೋತ್ಸವದಲ್ಲಿ ಪುತ್ತೂರಿನ ಹವ್ಯಾಸಿಗಳಿಂದ ಇದರ ರಂಗ ಪ್ರಯೋಗ. ಇದಕ್ಕೂ ಮೊದಲು ಮೋಹನ್ ಸೋನ ಬಿ.ವಿ.ಕಾರಂತರ ಬಗ್ಗೆ ಆಪ್ತವಾಗಿ ಮತ್ತು ಪ್ರಾಮಾಣಿಕವಾಗಿ ನಾಲ್ಕು ಮಾತಾಡಿದ್ದು ಚೆನ್ನಾಗಿತ್ತು. ಸುಮ್ಮನೆ ಅಲ್ಲಿ ನೆರೆದಿದ್ದವರನ್ನು ಸಂತೋಷಪಡಿಸಲು ಅವರು ಕಾರಂತರ ಬಗ್ಗೆ ಅವರ ಹುಟ್ಟೂರಿನ ಬಗ್ಗೆ ಸನ್ಮಾತುಗಳನ್ನು ಹೇಳಿದಂತೆ ಕಾಣಲಿಲ್ಲ. ಈ‌ 'ಕೆರೆಗೆ ಹಾರ'ದ ಪ್ರಯೋಗ, ಗೃಹಕೃತ್ಯದಲ್ಲಿ, ಸಂಸಾರದ ಕಷ್ಟಸುಖಗಳಲ್ಲಿ ತೊಡಗಿರುವ ಒಂದಷ್ಟು ಜನಸೇರಿ ಬಿಡುವಿನ ಸಮಯದಲ್ಲಿ ಮಾಡಿದ್ದು - ಎಂದು ಅವರು ಹೇಳಿದ್ದು ಪ್ರಯೋಗದ ಮಹತ್ತನ್ನು ಸಾರಿಹೇಳಿದಂತಿತ್ತು. ಏಕೆಂದರೆ ಅಭಿನಯವಲ್ಲದೆ ಇತರೆ ಕೃಷಿ/ಉದ್ಯೋಗದಲ್ಲಿ ತೊಡಗಿರುವವರಿಗೆ, ಅದರಲ್ಲೂ ಮಹಿಳೆಯರಿಗೆ ಬಿಡುವಿನ ಸಮಯವೆಂಬುದು ಇದೆಯೆ? ಅವರೇನು ವಾರಕ್ಕೆ ಎರಡು ರಜೆ ಅನುಭವಿಸುವ, ಪ್ರವೃತ್ತಿ ಬಿಡಿ, ವೃತ್ತಿಯನ್ನೇ ತಮ್ಮ ಬಿಡುವಿನಲ್ಲಿ ಮಾಡುವ ಆಧುನಿಕರೆ? ಈ ಮಸೂರದಲ್ಲಿ ನಿನ್ನೆಯ ಕೆರೆಗೆ ಹಾರವನ್ನು ನೋಡಿದರೆ ಅದರ ಸೂಕ್ಷ್ಮತೆಗಳು ಇನ್ನಷ್ಟು ಕಂಡಾವು.

Monday 3 March 2014

ಸಡಗರಕ್ಕೆ ಸಾವಿಲ್ಲ - ಬಿ ಸುರೇಶ ಲೇಖನ


(ಕಾರಂತರಿಗೆ ಎಂಬತ್ತು ಎಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆದ ಉತ್ಸವದಲ್ಲಿ ಸೆಪ್ಟಂಬರ್ 20 2009ರಂದು ಆಡಿದ ಮಾತಿನ ಲೇಖನ ರೂಪ)
(ನನಗೆ ಇಂದು ಉಪನ್ಯಾಸ ನೀಡು ಎಂದಿದ್ದಾರೆ. ನಾನು ಉಪನ್ಯಾಸಕ ಅಲ್ಲ. ಇನ್ನು ಭಾಷಣ ಮಾಡುವ ಕಲೆ ನನಗೆ ಸಿದ್ಧಿಸಿಲ್ಲ. ಹಾಗಾಗಿ ನಾನು ಮಾತಾಡುವುದೇ ಸೂಕ್ತ ಅಂದುಕೊಂಡಿದ್ದೇನೆ. ಮಾತು ಜಂಗಮ. ಅದಕ್ಕೆ ಲಂಘನದ ಸಾಧ್ಯತೆ ಹೆಚ್ಚು. ಹಾಗಾಗಿ ನಾನು ಮಾತನ್ನೇ ಆಡುತ್ತೇನೆ. ಈ ಮಾತುಗಳಲ್ಲಿ ಒಂದು ಕ್ರಮ ಇಲ್ಲ. ಇದು ನೆನಪಿನ ಹಾದಿ. ಇದಕ್ಕೆ ಹಿಡಿದದ್ದೇ ದಾರಿ. ಆದ್ದರಿಂದ ಇಲ್ಲಿ ಬರೆದಿರುವುದು ಚರಿತ್ರೆಯೂ ಅಲ್ಲ. ಇದು ನನ್ನ ಅನುಭವ ಮಾತ್ರ. ನನ್ನ ಅನುಭವ ನಿಮ್ಮದೂ ಆಗಬೇಕೆಂಬ ಒತ್ತಾಯವೂ ಇಲ್ಲ. ನನ್ನ ಅಭಿಪ್ರಾಯ ನಿಮ್ಮದಾಗಬೇಕೆಂಬ ಹೇರಿಕೆಯೂ ಇಲ್ಲ. ಇನ್ನು ಮಾತಿಗಿಳಿಯುತ್ತೇನೆ.