'It is never too late' ಎಂದೊಂದು ಮಾತಿದೆ. ಅದರಂತೆ ಬಿವಿಕಾರಂತರೆಂಬ ರಂಗಸೂರ್ಯ ಇಡಿಯ ಭಾರತವನ್ನು ಹೊಸ ನೇಸರಿನಲ್ಲಿ ಮುಳುಗೇಳಿಸಿದ ಬಳಿಕ ಸ್ವಲ್ಪ ತಡವಾಗಿಯಾದರೂ ಅವರ ಹುಟ್ಟೂರಿನವರಾದ ನಾವೆಲ್ಲರೂ ಅವರನ್ನು ಕರೆಯಿಸಿ ಅವರಿಗೊಂದು ಹೃದಯಸ್ಪರ್ಶಿ ಸನ್ಮಾನವನ್ನು ಮಾಡಿದುದು ಈಗ ಇತಿಹಾಸವಷ್ಟೆ. ಆ ಸಂದರ್ಭದಲ್ಲಿ ಅವರು ಮಾಡಿದ ಭಾಷಣದ ಧ್ವನಿ ಮುದ್ರಿತ ಪ್ರತಿ ಇಲ್ಲದಿದ್ದರೂ ಶ್ರೀಮತಿ ಡಾ ವಿದ್ಯಾ ಮನೋಹರ ಉಪಾಧ್ಯ ಅವರು ಅದನ್ನು ಆಲಿಸಿ ಬರಹರೂಪಕ್ಕಿಳಿಸಿದ ಸಂಗ್ರಹ ರೂಪ ಉಳಿದುಕೊಂಡಿದೆ. ಅದನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.